Friday, October 9, 2015

ಹಾಗೆ ಸುಮ್ಮನೆ-೩

ತಂಗಾಳಿ ಯಾರೋ ಬೆವರುತಿದ್ದಕ್ಕೆ ಜೋರಾಗಿ ಬೀಸುತಿತ್ತು, ಕರೆಂಟು ಮತ್ತೆ ಯಾವಾಗ ಬರುತ್ತದೆ ಎಂದು ಹೇಳದೆ ಹೊರಟು  ಹೋಗಿತ್ತು, ಮೇಣದ ದೀಪ ಇರುಳ ಜೊತೆ ಒಂಟಿಯಾಗಿ ಹೊರಾಡುತಿತ್ತು, ಬೀಸೋ ಗಾಳಿ ಜೊತೆ ಒಂದಿಸ್ಟು ಮಳೆ ಹನಿಗಳು ತಮಗೇ ಗೊತ್ತಿಲ್ಲದಂತೆ ಎಲ್ಲಿಗೋ ಬೀಳುತಿದ್ದವು,ಬದುಕು ಯಾರಿಗೂ, ಯಾಕೂ ಕಾಯದೆ ಮೆಲ್ಲನೆ ಸವೆಯುತಿತ್ತು.

ಉತ್ತರಗಳೇನೇ ಇರಲಿ ಪ್ರಶ್ನೆಗಳ ಅರ್ಥ ಹುಡುಕುದರೊಳಗೆ, ಪ್ರಶ್ನೆಗಳು ಅರ್ಥ ಕಳೆದು ಕೊಂಡಾಗಿತ್ತು. ನಿನ್ನೆಗಳು ನಾಳೆಗಳ ಬಗ್ಗೆ  ನಾಳೆಗಳು ನಿನ್ನೆಗಳ ಬಗ್ಗೆ ಯೋಚಿಸುತ್ತ ಬದುಕು ,ಹಸಿದ ಗಡಿಯಾರದ ಮುಳ್ಳಿಗೆ ನೇಣು ಹಾಕಿತ್ತು.

ಮೊನ್ನೆ ಹೀಗೆ ಯೋಚಿಸುತಿದ್ದೆ, ಬರೆಯಬೇಕು ಅನಿಸಿದನ್ನೆಲ್ಲ ಬರೆದಿದ್ದರೆ, ಹೇಳಬೇಕು ಅಂದು ಕೊಂಡದ್ದೆಲ್ಲ ಹೇಳಿದ್ದರೆ,ಮಾಡಬೇಕು ಅಂಥ ಯೋಚಿಸಿದ್ದೆಲ್ಲ ಮಾಡಿದ್ದರೆ, ಈಗ ಒಬ್ಬನೇ ಕುಳಿತು ಯೋಚಿಸಲು, ಕನವರಿಸಲು , ಚಿಂತಿಸಲು, ಮೆಲುಕು ಹಾಕಲು ಏನು ಉಳಿಯುತಿತ್ತು ?? so no regrets!!!.

                 ಬದುಕು ಅರ್ಧ ಬರೆದಿಟ್ಟ ಕವಿತೆ ಸಾಲು
                         ಹೆಣೆದು ಉಳಿದ ಸ್ವಲ್ಪ ಬಣ್ಣದ ನೂಲು
                                 ಸುಮ್ಮನೆ ಗೀಚಿದ ಚಿತ್ರ,
                    ಪಯಣದ ಎಲ್ಲ ತಿರುವುಗಲಾಚೆಯ ವಿಚಿತ್ರ!!!

ಕಣ್ಣು ಮುಚ್ಚಿ ಕುಳಿತರೆ, ಕಣ್ಣ ಪರದೆಯ ಹಿಂದೆ ಹಾಗೆ ಎಲ್ಲ ಚಿತ್ರಗಳು ಒಂದರ ಹಿಂದೆ ಒಂದರಂತೆ ತಿರುಗಿತ್ತಲೇ ಇರುತ್ತವೆ!! ನನ್ನ ಬದುಕಿನ ಸಿನಿಮಾ ಹಾಲ್ ನಲ್ಲಿ no intervals!! ಬದುಕು ಎಂದು ಮುಗಿಯದ ಕಿರುತೆರೆಯ ಧಾರವಾಹಿ,ಆಗಿಂದೊಮ್ಮೆ ಈಗಿಂದೊಮ್ಮೆ ಬರುವ ಕೆಲವು ಪಾತ್ರಗಳಿಗೆ ಸಂಭಂದವಿಲ್ಲ ಅಸ್ಟೇ.

                        ತೆರೆಯ ಮುಂದೆ ನಾ ರಂಗ ನಾಯಕ
                               ತೆರೆಯ ಹಿಂದೆ ಎಲ್ಲವು ನನ್ನದೇ ಕಾಯಕ
                         ಗದ್ಯ, ಪದ್ಯ ಗಮಕಗಳಿಗೆಲ್ಲ,
                                  ಅರ್ಥ ಹುಡುಕುದೇ ಬದುಕ???


ರಾತ್ರಿ ಮೆಲ್ಲನೆ ಸವೆಯುತಿತ್ತು,ಕರಿ ಮೋಡದ ಆಚೆಯಿಂದ ಚಂದ್ರ ಈಚೆ ಇಣುಕುತಿದ್ದ ,ಕನಸುಗಳಿಗೆ ರಾತ್ರಿ ಬೇಜಾರಾಗಿತ್ತು ನಿದ್ದೆ ಸದ್ದು ಮಾಡದೆ ತನ್ನೆಡೆಗೆ ಎಳೆಯುತ್ತಿತ್ತು.
                       
                 ಮತ್ತದೇ ಮುಂಜಾವು ನೋಡುವ ತವಕ
      ಇರುಳು ಹಗಲುಗಳ ನಡುವೆ ಇದೂ  ಒಂದು ಬದುಕ ????



ಸುಕೇಶ್




No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...