೧
ಎತ್ತರದ ಕಂಬಗಳಲ್ಲಿ
ಸದ್ದೇ ಮಾಡದೆ ಹರಿದಾಡಿ
ಅಲ್ಲಲ್ಲಿ, ಗಲ್ಲಿಗಳಲ್ಲಿ
ಕಾರ್ಖಾನೆಗಳಲ್ಲಿ
ಕೊಳೆಗೇರಿ ಬೀದಿಯ
ಗುಡಿಸಲುಗಳಲ್ಲಿ,
ಸಂಚಲನ ಮಾಡುವವೆ
ತಂತಿ ಕೊನೆಗೆ ಇಳಿಬಿಟ್ಟ
ದೀಪದೊಳಗೆ.
ಯಾರದೋ ವಿಶಾಲ ಚಾದರಗಳ
ಒಣಗಿಸಲು
ಹಗ್ಗ ಎಳೆದಂತೆ
ಕಂಬದಿಂದ ಕಂಬದ ಹೆಗಲಿಗೆ .
ಕಾಮಗಾರಿ ಪ್ರಗತಿಯಲ್ಲಿದೆ
ಕತ್ತಲೆ ಓಡಿಸಲು .
೨
ಪಾಳು ಬಿದ್ದ ತಂತಿ ಮೇಲೆ
ಶಕ್ತಿ ಸಂಚಲನದ ಅಲೆ.
ಕಾಯೋ ಜನ ಗುಂಡಿ ಕೈಯಲ್ಲಿ ಹಿಡಿದು
ಹಳೇ ಬಲ್ಬು ಉರಿವ ವೇಳೆಗೆ,
ಕಣ್ಣ ತುಂಬಾ ಒಮ್ಮೆ
ದೇವರ ಗುಡಿಯ
ಕೆಂಪಗಿನ ದೀಪ ನೋಡುವಾಸೆಗೆ.
ಗೋಡೆಗೆ ನೇತಾಡುವ ಲಾಂದ್ರ
ಅಪಶಕುನವೆಂಬಂತೆ
ಗಾಳಿಯಲಿ ತೂರಾಡಿತು
ಎಣ್ಣೆ ಕುಡಿದ ಅಮಲಿಗೆ!.
ಮೂಲೆಯಲಿ ಕೂತ
ಅಜ್ಜಿಯ ಕೋಲು,
ಮತ್ತು ,ಜಪ್ಪಯ್ಯ ಎಂದರು
ಮೇಲೇಳದ ಕಾಲು
ಗಳ ನಡುವೆ
ನಿಸ್ತಂತು ವ್ಯವಹಾರ
ಎಂದೋ ಮುಗಿದ ಸಮಾಚಾರ.
ಕಣ್ಣ, ಬುರುಡೆ ದೀಪ
ಆರೋ ಹೊತ್ತು
ಎದೆಯ ಬಾಗಿಲು ತೆರೆದು
ಹಕ್ಕಿ ಹಾರಿತ್ತು.
೩
ದುಡ್ಡು ತಿಂದ ಮಂತ್ರಿ
ಕುತಂತ್ರಿ.
ನಿಂತ ಕಾಮಗಾರಿ,
ಕತ್ತಲೊಳಗೆ ಕೊಳೆಗೇರಿ,
ಮೂಡದ ಸಂಚಲನ
ಅರ್ಥವಾಗದ ವ್ಯವಕಲನ.
ಗೋಡೆಬದಿಗೆ
ಜೋತುಬಿದ್ದ(ಸೋತು ಬಿದ್ದ),
ಹಳೇ ಸೀಮೆಎಣ್ಣೆ ದೀಪ
ಎಷ್ಟು ಹೋರಾಡುದು
ಅದು ಪಾಪ.
ಜಡ, ಚೇತನ
ಮರಣ ,ಜನನ .
--------------------------------------------------------------ಸುಕೇಶ್
ಎತ್ತರದ ಕಂಬಗಳಲ್ಲಿ
ಸದ್ದೇ ಮಾಡದೆ ಹರಿದಾಡಿ
ಅಲ್ಲಲ್ಲಿ, ಗಲ್ಲಿಗಳಲ್ಲಿ
ಕಾರ್ಖಾನೆಗಳಲ್ಲಿ
ಕೊಳೆಗೇರಿ ಬೀದಿಯ
ಗುಡಿಸಲುಗಳಲ್ಲಿ,
ಸಂಚಲನ ಮಾಡುವವೆ
ತಂತಿ ಕೊನೆಗೆ ಇಳಿಬಿಟ್ಟ
ದೀಪದೊಳಗೆ.
ಯಾರದೋ ವಿಶಾಲ ಚಾದರಗಳ
ಒಣಗಿಸಲು
ಹಗ್ಗ ಎಳೆದಂತೆ
ಕಂಬದಿಂದ ಕಂಬದ ಹೆಗಲಿಗೆ .
ಕಾಮಗಾರಿ ಪ್ರಗತಿಯಲ್ಲಿದೆ
ಕತ್ತಲೆ ಓಡಿಸಲು .
೨
ಪಾಳು ಬಿದ್ದ ತಂತಿ ಮೇಲೆ
ಶಕ್ತಿ ಸಂಚಲನದ ಅಲೆ.
ಕಾಯೋ ಜನ ಗುಂಡಿ ಕೈಯಲ್ಲಿ ಹಿಡಿದು
ಹಳೇ ಬಲ್ಬು ಉರಿವ ವೇಳೆಗೆ,
ಕಣ್ಣ ತುಂಬಾ ಒಮ್ಮೆ
ದೇವರ ಗುಡಿಯ
ಕೆಂಪಗಿನ ದೀಪ ನೋಡುವಾಸೆಗೆ.
ಗೋಡೆಗೆ ನೇತಾಡುವ ಲಾಂದ್ರ
ಅಪಶಕುನವೆಂಬಂತೆ
ಗಾಳಿಯಲಿ ತೂರಾಡಿತು
ಎಣ್ಣೆ ಕುಡಿದ ಅಮಲಿಗೆ!.
ಮೂಲೆಯಲಿ ಕೂತ
ಅಜ್ಜಿಯ ಕೋಲು,
ಮತ್ತು ,ಜಪ್ಪಯ್ಯ ಎಂದರು
ಮೇಲೇಳದ ಕಾಲು
ಗಳ ನಡುವೆ
ನಿಸ್ತಂತು ವ್ಯವಹಾರ
ಎಂದೋ ಮುಗಿದ ಸಮಾಚಾರ.
ಕಣ್ಣ, ಬುರುಡೆ ದೀಪ
ಆರೋ ಹೊತ್ತು
ಎದೆಯ ಬಾಗಿಲು ತೆರೆದು
ಹಕ್ಕಿ ಹಾರಿತ್ತು.
೩
ದುಡ್ಡು ತಿಂದ ಮಂತ್ರಿ
ಕುತಂತ್ರಿ.
ನಿಂತ ಕಾಮಗಾರಿ,
ಕತ್ತಲೊಳಗೆ ಕೊಳೆಗೇರಿ,
ಮೂಡದ ಸಂಚಲನ
ಅರ್ಥವಾಗದ ವ್ಯವಕಲನ.
ಗೋಡೆಬದಿಗೆ
ಜೋತುಬಿದ್ದ(ಸೋತು ಬಿದ್ದ),
ಹಳೇ ಸೀಮೆಎಣ್ಣೆ ದೀಪ
ಎಷ್ಟು ಹೋರಾಡುದು
ಅದು ಪಾಪ.
ಜಡ, ಚೇತನ
ಮರಣ ,ಜನನ .
--------------------------------------------------------------ಸುಕೇಶ್