ಬಾರದ ಮಳೆ
ಮೋಡದ ಮುನಿಸು
ಒಡೆದ ಭೂಮಿಯಲ್ಲಿ
ಚಿಗುರೊಡೆಯದ ಮೊಳಕೆ
ಸಿಡಿಲ ದ್ವನಿ
ಮೋಡದ ಮುನಿಸು
ಒಡೆದ ಭೂಮಿಯಲ್ಲಿ
ಚಿಗುರೊಡೆಯದ ಮೊಳಕೆ
ಸಿಡಿಲ ದ್ವನಿ
ಒಂದು ಹನಿಗೆ
ಕತ್ತು ಎತ್ತಿ ಮೇಲೆ
ನೋಡುವಾಗ
ಜಾರಿದ್ದು ಕಂಬನಿ.
ಕತ್ತು ಎತ್ತಿ ಮೇಲೆ
ನೋಡುವಾಗ
ಜಾರಿದ್ದು ಕಂಬನಿ.
ಕಪ್ಪೆ,ಕತ್ತೆಗಳಿಗೆ
ಮದುವೆ ಮಾಡಿದ್ದಾಯಿತು.
ಅಭಿಷೇಕಕ್ಕೂ
ವರುಣ ಒಲಿಯಲಿಲ್ಲ
ಊರ ಹಳ್ಳ ತುಂಬಲಿಲ್ಲ.
ಮದುವೆ ಮಾಡಿದ್ದಾಯಿತು.
ಅಭಿಷೇಕಕ್ಕೂ
ವರುಣ ಒಲಿಯಲಿಲ್ಲ
ಊರ ಹಳ್ಳ ತುಂಬಲಿಲ್ಲ.
ಬರಡು ಭೂಮಿಗೆ
ಸರಕಾರದ ಕುರುಡು
ಅದೇನೋ ಕಲ್ಯಾಣ ಯೋಜನೆ,
ಕಾದು ಕಾದು ತುಕ್ಕು ಹಿಡಿದ ನೇಗಿಲು
ಜೀವ ಸುಕ್ಕು ಚರ್ಮ ಹೊದ್ದು
ಕಾಯುತಿತ್ತೆ ಕೊನೆಗೊಂದು
ನಿಟ್ಟುಸಿರು ಬಿಡಲು.
---------------------------------------------------------------ಸುಕೇಶ್
No comments:
Post a Comment