Saturday, July 29, 2017

ಸಾಕ್ಷಾತ್ಕಾರ

ನವದ್ವಾರಗಳ ನಗರ
ತಲೆ ಗೋಪುರ 
ಕಂಡು ಕಾಣದೆ 
ಸುಮ್ಮನಿರುದೇ ಕಣ್ಣು 
ಕೇಳಿಯು ಕೇಳದಂತಿರಲು 
ಕಿವಿಗೆ ಭೋದಿಸಿ . 

ಎದೆ ಹೊಡೆವ ಘಂಟೆ,
ರಕ್ತದ ಚಲನೆ 
ಶುದ್ಧ,ಕಲ್ಮಶಗಳ ನಡುವೆ.  
ಒಂದೆಡೆ ನಿಲ್ಲದ ಕಾಲು 
ನಗರವನ್ನೇ ಎತ್ತಿ ಸಾಗಿದೆ 
ಅಲ್ಲಿಂದ ಇಲ್ಲಿಗೆ 
ಇಲ್ಲಿಂದ ಎಲ್ಲಿಗೆ? . 

ಮೌನಿಯಾಗದ ಬಾಯಿ 
ಬತ್ತದ ಕೊಳವೆ ಬಾವಿ,
ಮುಚ್ಚಿಕೊಂಡರೆ ನಗರವೇ 
ಖಾಲಿ,ಖಾಲಿ,ನೀರವ 
ಬಂಧಿ ಹಕ್ಕಿಯ ಗುಟುರಿಗೆ 
ನಗರದ ಮೂಲೆ, ಮೂಲೆ,
ಪ್ರತಿಧ್ವನಿಗಳ ಸ್ಥಾವರ. 


ಎಲ್ಲ ಕಡೆ ತೋರುವ ಮೂಗು,
ಎಲ್ಲ ಕಲಿವ ಹಂಬಲದ ಮಗು. 
ಗದರಿಸಿ,ಮಲಗಿಸಿ 
ಹೆಗಲಿಗೇರಿಸಿಕೊಂಡರೆ 
ಗಾಳಿ ಚೀಲ 
ನಾ ಹರಕಲು ಕುಚೇಲ. 

ನಗರ ನಿನ್ನದು 
ನನಗೆ ಒಂದಷ್ಟು  ದಿನದ ಗುತ್ತಿಗೆ 
ಮರೆತು,
ಸುಖಾಸುಮ್ಮನೆ ಮಲಗಿದ್ದೆ. 
ಎಬ್ಬಿಸು,ಉದ್ಧರಿಸು,
ಶುದ್ದೀಕರಿಸು,
ನಿನ್ನ  ಸಾಕ್ಷಾತ್ಕಾರದ ಭಕ್ತಿಗೆ,
ಮುಕ್ತಿಗೆ. 


--------------------------------------------------------------------------ಸುಕೇಶ್ 

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...