Friday, August 11, 2017

ಹೃದಯ

          
ಒಂದೊಮ್ಮ,
ವೈಭವದ ಹಂಪಿ. 
ಕೋಟೆ ಕೊತ್ತಲಗಳ 
ಸುತ್ತಲಲ್ಲಿ ಜನ. 
ಸಂಗೀತ,ಮಾಧುರ್ಯ 
ಮೆರವಣಿಗೆ,
ಕವಿಯ ಬರವಣಿಗೆ,
ಸಿಂಹಾಸನದ ಗಾಂಭಿರ್ಯ,
ಎಲ್ಲ ಗೆದ್ದ ಹಮ್ಮು,
ಸಹಜತೆಯ ಮಾಚಿ 
ಒಳೊಗೊಳಗೆ ನಾಚಿ 
ಸಂಭ್ರಮದ ಹಾಳೆಗಂಟಿದ 
ಸುಂದರ ತೈಲ ಚಿತ್ರ. 


ಈಗ,  
ಕಳಚಿದ ಕಂಬ 
ಹಳೇ ಸ್ಮಾರಕ 
ಆಗೊಮ್ಮೆ ಈಗೊಮ್ಮೆ 
ಬಂದು ಹೋಗುವ ಜನ,
ಇತಿಹಾಸದ ಮೆಲುಕು,
ಪ್ರತಿ ಪುಟದಲ್ಲು ಹುಳುಕು.  
ಕುಹಕಗಳ ಪಿಸುಮಾತು 
ಅರ್ಧ ಬಿದ್ದ ಗೋಡೆಗಳಲ್ಲಿ 
ಪ್ರತಿದ್ವನಿ. 
ಯಾರೋ ಅರ್ಧ ಬರೆದ ಚಿತ್ರ 
ನೆನಪು ಮಾತ್ರ. 

ಮತ್ತೆ,
ಒಡೆದ ಸ್ಮಾರಕ 
ನಾನು ಬಂಧಿ. 
ಮತ್ತೆ ಕಟ್ಟಿಕೊಳ್ಳಲು 
ನನಗೆ ನಾನೇ 
ನೇಮಿಸಿಕೊಂಡ ಸಿಬ್ಬಂದಿ. 


 

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...