Saturday, October 28, 2017

ಚುಟುಕುಗಳು- ಕನ್ನಡ ರಾಜ್ಯೋತ್ಸವಕ್ಕೆ

                   ೧

ಬೆಂಗಳೂರಿನಲ್ಲಿ ಕನ್ನಡ 

ಬೆಂಗಳೂರಿನಲ್ಲಿ ಕನ್ನಡ
ಕನ್ನಡಿಯೊಳಗಿನ
ಚಿನ್ನದ ಗಂಟು.
ಹೊರಗು
ಅಳಿದುಳಿದದ್ದು
ಅಲ್ಪ ಸ್ವಲ್ಪ ಅಲ್ಲಲ್ಲಿ ಉಂಟು.


ಪರ ರಾಜ್ಯದ ಕನ್ನಡಿಗರು 

ಮೊನ್ನೆ ಪರ ರಾಜ್ಯದವರೊಬ್ಬರು
ಅರ್ಧಂಬರ್ಧ ಕನ್ನಡದಲ್ಲಿ
ಮಾತಾಡಲು ಶುರುವಿಟ್ಟರು,
ಖುಷಿಯಿಂದ ಹೇಳಿದೆ
ಈ ಬಾರಿಯ ರಾಜ್ಯೋತ್ಸವ
ಪ್ರಶಸ್ತಿ ನಿಮಗೇ ಕೊಟ್ಟಾರು!!



ಕಾನ್ವೆಂಟ್ ನ ಕಂದ 

ಕಾನ್ವೆಂಟಿಗೆ ಸೇರಿಸುವಾಗ
ಕಂದನ ಕೇಳಿದರು,
"ನಿನಗೆ ಇಂಗ್ಲಿಷ್ ಗೊತ್ತಾ ?"
ಇಲ್ಲವೆಂದು ತಲೆಯಾಡಿಸಿದ
ಕನ್ನಡದ ಪೋರ,
"ಸರಿ ನಾವು ಕಳಿಸಿ ಕೊಡುತ್ತೇವೆ"
"ನಿನಗೆ ಕನ್ನಡ ಗೊತ್ತೇ ?"
ಹೌದೆಂದ ಹೆಮ್ಮೆಯಿಂದ.
"ಸರಿ ನಾವು ಮರೆಸಿ ಬಿಡುತ್ತೇವೆ" .


ಕನ್ನಡದ ಮೇಲೆ ಕಾಗೆ, ಗೂಬೆ 

ಮೊನ್ನೆ ಹೀಗೆ
ಕಾಗೆ
ಕನ್ನಡದ ಬಾವುಟದ
ಕಂಬದಲ್ಲಿ ಕೂತಿತ್ತು,
ಓಡಿಸಲು ಕಲ್ಲೆಸೆದೆ
ಮಿಟುಕಾಡಲಿಲ್ಲ .
ಸುತ್ತ ಜನ ಸೇರಿದರು
ಕನ್ನಡದ ಬಾವುಟಕ್ಕೆ
ಕಲ್ಲೆಸೆದು
ಅವಮಾನ ಮಾಡಿದೆನೆಂದರು,
ಕೋರ್ಟು ಮುಂದೆ ನಿಂತೆ .
"ಬಾವುಟದ ಮೇಲೆ ಕುಳಿತ
ಕಾಗೆ ಓಡಿಸುತಿದ್ದೆ ಜನ ತಪ್ಪು ತಿಳಿದರು " ಅಂದೆ .

ತಕ್ಕಡಿ ನನ್ನ ಕಡೆ ತೂಗಿತು
"ಸರಿ ಆ ಕಾಗೆಯನ್ನು ಹಿಡಿದು ತನ್ನಿ"
ನಗುತ್ತಾ ಆಜ್ಞಾಪಿಸಿದರು
ಜಡ್ಜ್ ಸಾಹೇಬರು .

"ನೀವು ಬನ್ನಿ ಕಾಗೆ ಓಡಿಸುದು ತಪ್ಪಲ್ಲ"

ಪುಸ್ತಕದ ಅಂಗಡಿಯಲ್ಲಿ

ಒಂದು ಕನ್ನಡ ಪುಸ್ತಕ ಕೊಡಿ,
ಇನ್ನಾದರೂ ಶುರುಮಾಡೋಣ
ಓದಲು
ನಮ್ಮ ನಾಡು ನುಡಿ.


ಕನ್ನಡಿಗ 
ಗೊತ್ತೇ ನಿನಗೆ
ಕುವೆಂಪು, ಮಾಸ್ತಿ,ಅಡಿಗ?
ಗೊತ್ತಿಲ್ವೆ ?
ನೀ ಯಾವ ಸೀಮೆ ಕನ್ನಡಿಗ!!!



---------------------------------------------------------------------ಸುಕೇಶ್ ಪೂಜಾರಿ 



No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...