Tuesday, June 16, 2015

ದಾರಿ

ಗುರಿ ಮರೆತ ದಾರಿ
ನಡೆದರೆಸ್ಟು,ಬಿಟ್ಟರೆಸ್ಟು
ವಿರಾಮಿಸಿದ ನಿಮಿಷಗಳು
ನಕ್ಕಾಗಲೇ ಅರಿವಾಗಲಿಲ್ಲ ಯಾಕೆ,
ಗುರಿಯೆಡೆಗೆ ದಾರಿ
ಹುಡುಕ ಬೇಕಿತ್ತೆಂದು.

ಕಲ್ಲು, ಮುಳ್ಳು, ತಿರುವುಗಳಿಗೆ ಹೆದರಿ
ಸಣ್ಣ ದಾರಿ
ಹಿಡಿಯಲಿಲ್ಲ ಕಾಲು.
ದಾರಿದೀಪ ರಥ ಬೀದಿಗಳಲ್ಲಿ
ನಡೆಯಲು ನಾಚುತಿತ್ತು ಬರಿಗಾಲು.
ಕನವರಿಕೆ ಬೆಂಬಿಡದ ಭೂತ!!!

ದೂರದಾಚೆಯ ರಸ್ತೆ ನಡೆದರೆ,
ಮುಳ್ಳುಗಳಿಲ್ಲದ  ಹೋವು,
ವಿಷಗಳಿಲ್ಲದ ಹಾವು,
ಕಣ್ಣೀರು ಬರದ ನೊವು.
ಆದರೆ ನಡೆಯುದು ಹೇಗೆ?
ಅಂಧ ಮನಸ್ಸು,ಅರ್ಧ ಕನಸು,
ಸಮಯದ ಜೊತೆ ಓಡಲು ಒಲ್ಲದ ವಯಸ್ಸು!!!

ಮೌನದೊಳಗಿನ ಮನಸು
ಪಿಸುಗುಟ್ಟಿದೆ
ಮತ್ತೊಂದು ದಾರಿ ಹುಡುಕಲು,
ಮತ್ತೆ ಹೆಜ್ಜೆ ಹಾಕುತ್ತಿದ್ದೇನೆ
ನನ್ನ ಸದ್ದು ಬರೀ ನನಗೆ ಕೇಳುವಂತೆ!!

ಸುಕೇಶ್ 


No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...