Saturday, January 14, 2017

ಚಿತ್ರ ಬರಹ -೩


ಈ ಲೇಖನ ಬರೆಯೋಕೆ ಯಾಕೋ ಸ್ವಲ್ಪ ನಾಚಿಕೆ ಆಗುತ್ತದೆ,ಸಣ್ಣದಾಗಿ guilt ಕಾಡುತ್ತದೆ ಎಲ್ಲೋ ಯಾರದೋ ಹಸಿವಿನ ಕೂಗು, ಪುಟ್ಟ ಹೊಟ್ಟೆಯ ಚೀರಾಟ ಕೇಳಿದಂತೆ,ಕೊನೆಯ ಉಸಿರು ಎಳೆಯಲು ಶಕ್ತಿ ಇಲ್ಲದೆ, ಯಾರೋ ಮತ್ತೆ ತೆರೆಯದೆ ಕಣ್ಣು ಮುಚ್ಚಿದಂತೆ ಅನಿಸುತ್ತದೆ.

ನಾನು ದುಡಿದದ್ದು, ಎಷ್ಟು ಬೇಕಾದರೂ ತಿನ್ನುತ್ತೇನೆ,ಎಷ್ಟು ಬೇಕಾದರೂ ವೇಸ್ಟ್ ಮಾಡುತ್ತೇನೆ. ಏನಿವಾಗ ?? ಎಷ್ಟೋ ಜನ ಹೀಗೇ ಅಂದುಕೊಂಡು ಹೋಟೆಲ್,ಮನೆಗಳಲ್ಲಿ ಬಿಸಾಡಿದೆಷ್ಟು?. ಒಮ್ಮೆ ಯೋಚಿಸಿ ಪಕ್ಕದ ಬೀದಿಯಲ್ಲೇ ಯಾರೋ ದಿನ ಪೂರ್ತಿ ಸರಿಯಾಗಿ ಊಟಮಾಡದೆ,ಬೇಡಿದವರ ಕೈಯಲ್ಲಿ ಬೈಸಿಕೊಂಡು , ನಿತ್ರಾಣದಿಂದ ನಿದ್ದೆ ಹೋಗಿರಬಹುದು.

ಯಾರು ಹೊಣೆ? ನಾವೇ, ಇನ್ನಾರು?? ದೇಶ ಸ್ವತಂತ್ರಗೊಂಡು ಇಷ್ಟೊಂದು ವರ್ಷವಾದರೂ ನಮಗೆ, ದಾರಿದ್ರ್ಯ,ಹಸಿವು,ಪೌಷ್ಟಿಕ ಆಹಾರದ ಕೊರತೆಗಳನ್ನು ದೂರ ಮಾಡಲಾಗಲಿಲ್ಲ. ಅಂಥವರು ನಾವು smart city , cashless ವ್ಯವಹಾರಗಳ ಬಗ್ಗೆ ಮಾತಾಡುತ್ತೇವೆ . ರಾಜಕೀಯ, ಸಿನೆಮಾ, ಕ್ರಿಕೆಟ್, ಹಾಳು ಮೂಳು ಸುದ್ದಿಗಳ  ಸದ್ದಿನ ಜೊತೆ ಯಾರದೋ ಹಸಿವಿನ ಚೀರಾಟ ನಮಗೆ ಕೇಳುದೇ ಇಲ್ಲ.

ನಿಮಗೊಂದು ಆತಂಕ ಪಡಬೇಕಾದಂಥ ವಿಷಯ ಗೊತ್ತೇ, ನಮ್ಮ ದೇಶ ಪ್ರಪಂಚದಲ್ಲೇ ಅತೀ ಹೆಚ್ಚು ಹಸಿವಿನಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವವರ ಹೊಂದಿರುವ ದೇಶ ,ಒಟ್ಟು ೧೯೪ ಮಿಲಿಯನ್ ಗೂ ಜಾಸ್ತಿ ಜನ ತುತ್ತು ಅನ್ನಕ್ಕೂ ಗತಿಯಿಲ್ಲದೆ (ಸಾಯುತ್ತಿದ್ದಾರೆ) ಬದುಕುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಒಟ್ಟು ೭೯೫ ಮಿಲಿಯನ್ ಜನ ಒಂದು ಹೊತ್ತಿನ ಅನ್ನಕ್ಕಾಗಿ ಕಾಯುತ್ತಾ ಬದುಕುತ್ತಾರೆ. ನಾಳೆ ಮತ್ತೆ ನಿಮ್ಮ ತಟ್ಟೆಯಲ್ಲಿ ತಿನ್ನದೇ ಉಳಿದ ಆಹಾರ ಬಿಸಾಡುವಾಗ ಈ ಅಂಕಿಅಂಶವನ್ನು ಜ್ಞಾಪಿಸಿಕೊಳ್ಳಿ.

ಇಸ್ಟೇ ಅಲ್ಲ ಈ ಕೆಳಗಿನ ಅಂಕಿಅಂಶಗಳ ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ.

ದೇಶದ ಒಟ್ಟು 15% ಜನ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ.
ಸುಮಾರು 30% ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ.
3000 ಮಕ್ಕಳು ಆಹಾರದ ಕೊರತೆಯಿಂದ ದಿನಾ ಸಾಯುತ್ತಿದ್ದಾರೆ.
(ಮೇಲಿನ ಅಂಕಿಅಂಶಗಳು India state hunger index ಮತ್ತು Global hunger index ನಿಂದ )

ನಮ್ಮ ದೇಶದ ಮಧ್ಯಪ್ರದೇಶ ರಾಜ್ಯದಲ್ಲಿ ಇಥಿಯೋಪಿಯಾ ಮತ್ತು ಸೂಡಾನ್ ದೇಶಗಳಿಗಿಂತಲೂ ಜಾಸ್ತಿ ಜನ ಹಸಿವಿನಿಂದ ನರಳುತ್ತಿದ್ದಾರೆ.

ನಾಚಿಕೆ ಆಗಬೇಕಾದದ್ದೆ, ಅದಕ್ಕೆ ಇನ್ನೂ ಮುಂದುವರಿದ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗುತ್ತಿದ್ದೇವೆ.

ನಮ್ಮಲ್ಲಿ,ಯಾವುದೋ ಕಲ್ಲಿಗೆ ಸುರಿಯಲು ಹಾಲು,ಮೊಸರು ಇದೆ,ಇನ್ನಾವುದೋ ಕೋಟಿ ಕೋಟಿ ದೇವರುಗಳಿಗೆ ಇಡಲು ಬೆಣ್ಣೆ , ತುಪ್ಪ, ಹಣ್ಣು ಹಂಪಲುಗಳಿವೆ,ಹೋಮ ಹವಣಗಳಿಗೆ ಸುರಿಯಲು ದವಸ ಧಾನ್ಯಗಳಿವೆ,ಆದರೆ ಅದೇ ಗುಡಿಗಳ ಮುಂದೆ, ಇನ್ನಾವುದೋ ರಸ್ತೆಗಳಲ್ಲಿ , ಎಲ್ಲೋ ಮಾರ್ಕೆಟ್ ಗಳಲ್ಲಿ ಹೊಟ್ಟೆ ಹುಳಗಳಿಗೆ ಆಹಾರವಿಲ್ಲದೆ ಬಿದ್ದುಕೊಂಡಿರುವ ಜೀವಗಳ ಕೇಳುವವರಿಲ್ಲ,

 ನಮ್ಮಲ್ಲಿ ಬೇಕಾದಷ್ಟು ಜನಸಂಖ್ಯೆ ಇದೆ ಒಂದಷ್ಟು ಜನ ಹಸಿವಿನಿಂದ ಸತ್ತರೆ ನಮಗೇನೂ..... !!

ಒಮ್ಮೆ ಯೋಚನೆ ಮಾಡಿ ದೇಶದ ಈ ಪರಿಸ್ಥಿತಿಗೆ ನಾವೂ ಒಂದಷ್ಟು ಹೊಣೆ ಅನ್ನಿಸುದಿಲ್ಲವೆ. ನಾವು ಸೃಷ್ಟಿಸಿಕೊಂಡ ನಿಯಮಗಳು , ನಮ್ಮ ರಾಜಕೀಯದ ಕಿತ್ತಾಟ, ದಿನಾ ಸುಳ್ಳು ಸುದ್ದಿಗಳನ್ನೇ ಹಬ್ಬಿಸುವ ನಮ್ಮ news channel ಗಳು,ನಮ್ಮ ಉಡಾಫೆ ಧೋರಣೆಗಳು, ಎಲ್ಲೋ ಒಂದುಕಡೆ ನಾವೇ ಹೊಣೆ ಹೊತ್ತು ತಲೆಬಾಗಿಸ ಬೇಕಾಗ ಬಹುದು.

ಜನರಿಗೆ ಇಂಟರ್ನೆಟ್ ಉಚಿತ ಒದಗಿಸಲು ಯೋಚಿಸುವ ಸರ್ಕಾರ, ಮೊದಲು ಜನರ ಹಸಿವು ನೀಗಿಸಲು ಪ್ರಯತ್ನಿಸಬೇಕು.ಸಂಘ ಸಂಸ್ಥೆಗಳು ವರ್ಷ ವರ್ಷ ಸಿನಿಮಾ ನಾಯಕ ನಾಯಕಿಯರ, ರಾಜಕೀಯದವರ ಕರೆಸಿ ವಾರ್ಷಿಕೋತ್ಸವ ಮಾಡಿದರೆ ಸಾಲದು, ಜನರ, ಕೈಲಾಗದವರ ಕಷ್ಟ ಅರಿತು ಸಹಾಯ ಮಾಡಬೇಕು. ದೇಶದಲ್ಲಿ ಸರಿಯಾದ ಶೇಖರಣಾ ಘಟಕಗಳಿಲ್ಲದೆ ಎಷ್ಟೋ ಆಹಾರ ಪದಾರ್ಥಗಳು ಹಾಳಾಗುತ್ತಿವೆ ,ಸಮರ್ಪಕವಾದ ಪೂರೈಕೆಯ ವಿಧಾನಗಳಿಲ್ಲದೆ ಅರ್ಧದಲ್ಲೇ ಹಾಳಾಗಿ ಹೋಗುತ್ತಿವೆ ಇವೆಲ್ಲವುಗಳ ನಿರ್ವಹಣೆಯಾಗ ಬೇಕು .ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯುವ ಜನಾಂಗದ ಸಮರ್ಪಕ ಬಳಕೆಯಾಗ ಬೇಕು. 

ನಾವು ಮನುಷ್ಯರು, ನಮ್ಮ ಮೂಲ ಒಂದೇ, ಹಂಚಿ ತಿನ್ನ ಬೇಕಾದವರು. ಕಿತ್ತಾಡಿಕೊಂಡು ಅಲ್ಲ. ಎಲ್ಲ ಒಂದಾದರೆ ಮತ್ತೊಂದಿಷ್ಟು ಮನೋಬಲವಿದ್ದರೆ ಈ ಸಮಸ್ಯೆಯನ್ನು ಕಿತ್ತೊಗೆಯಬಹುದು.

ಗಾಂಧೀಜಿ ಎಲ್ಲೋ ಹೇಳಿದ ಮಾತು “Be the change you want to see in the world.” 

Are you????.

ಯೋಚನೆ ಮಾಡಿ......... 



.......  . . . . . . . . . . . .. .. . . . . . . .. . . . . . . .. ಸುಕೇಶ್ 

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...