ನಾ ಹುಟ್ಟುವಾಗಲೇ
ಹುಟ್ಟಿಕೊಂಡಿತು,
ನನ್ನ ಸುತ್ತಲೇ
ಸುತ್ತಿಕೊಂಡಿತು.
ಪರದೆ ಮೇಲೆ ಯಾರೋ
ಸಣ್ಣಗೆ ಎಳೆದ ಗೆರೆ
ಅಳಿಸದೆ ಪರಿಧಿಯಾಯಿತು .
ಸುತ್ತಣ ಗೋಡೆ,
ಕೆಡವಿದಷ್ಟು ಕಟ್ಟೋ ಮಂದಿ,
ಹಾರೆ ಗುದ್ದಲಿಗಳ ಮೇಲೆ
ಹಾರೋ ವಿಭಜನೆಯ ಪತಾಕೆ.
ಹಾಹಕಾರಗಳ ನಡುವೆ,
ಆಹಾರ ಬೇಯಿಸಿಕೊಂಡದ್ದು
ಅವರವರು, ಅವರವರ ಮತಕ್ಕೆ .
ಕಾಣದ ದೇವರುಗಳಿಗೆ
ಕೈ, ಕಾಲು, ಕಣ್ಣು ಕೊಟ್ಟು
ಅಲ್ಲಲ್ಲಿ ನಿಲ್ಲಿಸಿ ಆಯಿತು.
ಅವ ಏನು ಮಾಡಿಯಾನು
ಪೂಜಿಸಲೊಂದು ಜಾತಿ,
ಬೇಡಲೊಂದು .
ಎಂದೂ ಮುಗಿಯದ ಇಷ್ಟಾರ್ಥ!!.
ಅಂದು ಗುರು ಹೇಳಿದ್ದ
ಒಂದೇ ಜಾತಿ,ಮತ,ಕುಲ.
ನಾವು ಕೇಳಲಿಲ್ಲವಲ್ಲ,
ಗುರುವಿನ
ಗುಲಾಮನಾಗಲಿಲ್ಲ.
ಒಬ್ಬೊಬ್ಬರಿಗೆ ಒಂದೊಂದು
ಮೀಸಲಾತಿ,
ಹೀಗೇ ಆದರೆ ಮುಂದೊಂದು ದಿನ
ಪೂರ್ತಿ ಅವನತಿ.!!!
ಹುಟ್ಟಿಕೊಂಡಿತು,
ನನ್ನ ಸುತ್ತಲೇ
ಸುತ್ತಿಕೊಂಡಿತು.
ಪರದೆ ಮೇಲೆ ಯಾರೋ
ಸಣ್ಣಗೆ ಎಳೆದ ಗೆರೆ
ಅಳಿಸದೆ ಪರಿಧಿಯಾಯಿತು .
ಸುತ್ತಣ ಗೋಡೆ,
ಕೆಡವಿದಷ್ಟು ಕಟ್ಟೋ ಮಂದಿ,
ಹಾರೆ ಗುದ್ದಲಿಗಳ ಮೇಲೆ
ಹಾರೋ ವಿಭಜನೆಯ ಪತಾಕೆ.
ಹಾಹಕಾರಗಳ ನಡುವೆ,
ಆಹಾರ ಬೇಯಿಸಿಕೊಂಡದ್ದು
ಅವರವರು, ಅವರವರ ಮತಕ್ಕೆ .
ಕಾಣದ ದೇವರುಗಳಿಗೆ
ಕೈ, ಕಾಲು, ಕಣ್ಣು ಕೊಟ್ಟು
ಅಲ್ಲಲ್ಲಿ ನಿಲ್ಲಿಸಿ ಆಯಿತು.
ಅವ ಏನು ಮಾಡಿಯಾನು
ಪೂಜಿಸಲೊಂದು ಜಾತಿ,
ಬೇಡಲೊಂದು .
ಎಂದೂ ಮುಗಿಯದ ಇಷ್ಟಾರ್ಥ!!.
ಅಂದು ಗುರು ಹೇಳಿದ್ದ
ಒಂದೇ ಜಾತಿ,ಮತ,ಕುಲ.
ನಾವು ಕೇಳಲಿಲ್ಲವಲ್ಲ,
ಗುರುವಿನ
ಗುಲಾಮನಾಗಲಿಲ್ಲ.
ಒಬ್ಬೊಬ್ಬರಿಗೆ ಒಂದೊಂದು
ಮೀಸಲಾತಿ,
ಹೀಗೇ ಆದರೆ ಮುಂದೊಂದು ದಿನ
ಪೂರ್ತಿ ಅವನತಿ.!!!
--------------------------------------------------------ಸುಕೇಶ್
No comments:
Post a Comment