Thursday, May 14, 2015

ಬದುಕು


ಕರುಳ ಬಳ್ಳಿಯಾಚೆ ಸರಿದು,
ಕಣ್ಣ ಬಿಂಬಗಳ ಮೆಲ್ಲ ತೆರೆದು,
ಗಾಳಿ ಚೀಲಗಳಿಗೆಲ್ಲ ಉಸಿರ ತುಂಬಿ,
ಎದೆಯ ಢವ ಢವಕ್ಕೆ ಅಮ್ಮ ಕಿವಿಗೊಟ್ಟು,
ನಿಟ್ಟಿಸಿರು  ಬಿಟ್ಟಾಗಲೇ
ತಿರುಗಿದ್ದು ಬದುಕಿನ ಮೊದಲ ಹಾಳೆ .

ಮೇಲೆ ಆಸೆಯಿಂದ ಕದ್ದು ನೋಡುವ
ಚಂದಿರನ ವಂಚಿಸಿ,
ಅಮ್ಮ ತಿನ್ನಿಸುತ್ತಿದ್ದ ಪ್ರೀತಿಯ ತುತ್ತು,
ಹಾಗೆ ಕರಗುತ್ತಿತ್ತು
ಚಂದಿರನ ಜೊತೆ ಜೊತೆಗೆ,

ಬದುಕ ದಾರಿಯಲ್ಲಿ
ಗಡಿಯಾರದ ಮುಳ್ಳುಗಳ ಹಿಂದೆ ಓಡುವ ನಮಗೆ,
ಕನಸುಗಳದ್ದೆ ಬೆಂಗಾವಲು,
ಅಲ್ಲಲ್ಲಿ ಹರಿದ ಪುಟಗಳು ಇತಿಹಾಸ ಹೇಳಿದ್ದುಂಟು !!

ಪ್ರತಿ ದಿನ  ಕನ್ನಡಿಯ ಎದುರು ನಿಂತು,
ಹಣೆ ಬರಹ ಓದಿಕೊಳ್ಳುವಾಗ ,
ಎಲ್ಲಿ ಹಸ್ತ ರೆಕೆಗಳು ಕರಗಿ ,
ಭವಿಷ್ಯ ಬದಲಾಗುತ್ತದೋ ಎಂದು ಕೊಳ್ಳುತ್ತೇನೆ ,

ಬದಲಾದದ್ದು ಭವಿಷ್ಯವಲ್ಲ ,
ಹಣೆಬರಹವಂತು ಅಲ್ಲವೇ ಅಲ್ಲ!!!

ನಡೆದದ್ದೆಲ್ಲ ದಾರಿ,ಬರೆದದ್ದೆಲ್ಲ ಕವಿತೆಗಳು
ಎಂದು ಬೀಗುವ ಹೊತ್ತಿಗೆ,
ಈ ಬದುಕ ಪುಸ್ತಕದ ಪ್ರವಾಸ ಕಥನದ ಪುಸ್ತಕಕ್ಕೆ,
ಯಾರೋ ಹೊದಿಕೆಯಾಗಿ,
ಇನ್ನಾರೋ ಮುಕಪುಟಗಳಾಗಿ,
ಮತ್ತಾರೋ ಹಿನ್ನುಡಿ ಬರೆಯುತ್ತಾರೆ.
ಕಡೆಗೆ ಪ್ರಕಟ ಮಾಡೋರಿಲ್ಲದೆ 
 ಪುಸ್ತಕ ಭೂಮಿಯೂಡಲ ಹಳೇ ಟ್ರಂಕು ಸೆರುತ್ತದೆ.

ಅರೆ ಆಶ್ಚರ್ಯ ,ಅಲ್ಲಿ ಅಪ್ಪನದ್ದು,
ಬೀದಿ ಕೊನೆಯ ಅಜ್ಜನದ್ದು,ಇನ್ನಾರದ್ದೋ
ಬದುಕ ಪುಸ್ತಕಗಳ
ಓರಣವಾಗಿ ಜೋಡಿಸಲಾಗಿದೆ,
ಪಕ್ಕದಲ್ಲಿ ಕೆಲವು ಖಾಲಿ ಟ್ರಂಕುಗಳು ,
ನಿಮ್ಮ ಪುಸ್ತಕದ ನಿರೀಕ್ಷೆಯಲ್ಲಿ !!!

ಪ್ರತಿ ದಿನದ ಬರವಣಿಗೆಯ
ಮೆರವಣಿಗೆ ಈಗ ಸ್ಮಶಾನ ಮೌನ,
ನನ್ನ ಸಮಾದಿಯ ಒಳಗೆ ಕೆಲವರು
ಕದ್ದು ನೋಡುತ್ತಾರೆ,
ಬದುಕ ಪುಸ್ತಕ ನಕಲು ಮಾಡಲು !!!!


ಸುಕೇಶ್

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...