Sunday, May 17, 2015

ಚಿಂದಿ ಹೃದಯ ಮತ್ತು ಕನಸು

ಮಾರಿಕೊಂಡ  ಹೃದಯದಲ್ಲಿ
ಮಾರಿ ಹಬ್ಬ ನಡೆದಿದೆ,
ಎಲ್ಲೆಲ್ಲೂ ರಕ್ತ ಸಿಕ್ತ,
ಕನಸುಗಳು ಕೊಲೆಯಾಗಿದೆ.

ಭ್ರಮೆಯ ದೆವ್ವ
ಬೆನ್ನು ಹತ್ತಿದೆ.
ಕನಸುಗಳ ಶವ ಸಂಸ್ಕಾರಕ್ಕೆ
ನೆನಪುಗಳ ಚಿತೆ ಉರಿಯುತ್ತಿದೆ.

ನೀರವತೆಯ ಸೂತಕಕ್ಕೆ
ಬದುಕು ಬಿಕ್ಕುತ್ತಿದೆ
ಮೌನಕ್ಕೆ ಗಿರವಿ ಇಟ್ಟುಕೊಂಡಿದ್ದ
ಮಾತುಗಳು ಅರ್ಥ ಕಳೆದು ಕೊಂಡಾಗಿದೆ.

ಬೋಳು ಆತ್ಮ,ಉತ್ಸವ ಮೂರ್ತಿ
ಮೆರವಣಿಗೆ ನಡೆಯುತ್ತಿದೆ
ನೀನು ಬಾ,
ಅಲ್ಲಲ್ಲಿ ಉಘೇ ಎನ್ನಲು.

ದಯಮಾಡಿ ಯಾರಾದರು ಬನ್ನಿ,
ಒಂದಿಸ್ಟು  ಕನಸ ಸಾಲ ತನ್ನಿ,
ಚಿಂದಿ ಹೃದಯ ಮತ್ತೆ ಮಾರಿಕೊಳ್ಳುತ್ತೇನೆ
ಮುಂದಿನ ಸಾರಿ ಹಬ್ಬ ಮಾಡುದು ನಿಮ್ಮ ಸರದಿ!!!!!

                                                                         ಸುಕೇಶ್ 

No comments:

Post a Comment

ಅಗ್ನಿಯ ಬಟ್ಟಲು

ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ  ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ  ...